ಮೌನವಾಗಿದ್ದು ಸಾಕೆಂದು...ಭುವಿಯ ನೋಡಲು..
ಬರುವುದು ಮಳೆ..
ಇಳೇಯ ತಣಿಸಲು ಬಾ..ಎಂದು ಮನದಲ್ಲೇ..
ಮೌನವಾಗಿ ಕರೆದಳು ಇಳೆ.
ಕೊನೆಗೂ..ಒಂದಾಯ್ತು.ಇಳೆ..ಮತ್ತು ಮಳೆ..
ಕಾಡುತಿದ್ದ ಮೌನಕೆ ವಿದಾಯ.ಹೇಳಿತು..
ಪ್ರಕೃತಿಯ ಪ್ರೀತಿಕಂಡು..ಮನಸ್ಸು..ಭಾರವಾಯಿತು. .
ಚಿಟ ಪಟ ಚಿಟ ಪಟ..ಮಳೆಯ ಸದ್ದಿಗೆ..
.ಮನದಲಿದ್ದ ನಿನ್ನ ನೆನಪು ನವಿಲಿನಂತೆ
ಗರಿಯ ಬಿಚ್ಚಿ ಕುಣಿದು ಬಿಡಲು ತವಕಿಸಿತ್ತು..
ಅಷ್ಟರಲ್ಲಿ ಇಳೆಯನಗಲಿ ಮಳೆಯು ದೂರ ಸಾಗುತಿತ್ತು..
ಭುವಿಯ ತೊರೆದ ಮಳೆಯ ಕಂಡು ಏಕೋ ಕಾಣೆ
ಹೃದಯವನ್ನು ನಿನ್ನ ನೆನಪೇ ಕಾಡುತಿತ್ತು...
ಮನದ ಪುಟಗಳಮೇಲೆ..ಕಣ್ಣಿರೆಲ್ಲ..ಮೋಡವಾಗಿ ..
ನಿನ್ನ ನೆನಪು..ಕಣ್ಣ ಹನಿಗಳಾಗಿ..ಬಿದ್ದು..
ಹೃದಯದ ಚಿಪ್ಪಿನೊಳಗೆ...ಸ್ವಾತಿ ಮುತ್ತಾಗಿವೆ....
ಭಾವಜೀವಿ
* ಅಮ್ಮು*
No comments:
Post a Comment